ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ ನಲ್ಲಿ ಸಿಕ್ಕಾಪಟ್ಟೆ ಗಮನ ಸೆಳೆದು ಟಿವಿ ಸೀಸನ್ ಗೂ ಪ್ರವೇಶಿಸಿ ಎಲ್ಲಿಯೂ ಹೈಲೇಟ್ ಆಗುತ್ತಿರುವ ರ್ಯವರ್ಧನ್ ಗುರೂಜಿ ಕೆಲ ಟಾಸ್ಕ್ ಗಳಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದಾರೆ.. ಒಂದು ಬಾರಿ ಕ್ಯಾಪ್ಟನ್ ಸಹ ಆಗಿದ್ದರು..
ಮುಖ , ತುಟಿ , ಕೆನ್ನೆ ನೋಡಿ , ಮಚ್ಚೆ ನೋಡಿ ಭವಿಷ್ಯ ಹೇಳುತ್ತಾ ಗಮನ ಸೆಳೆಯುತ್ತಿರುತ್ತಾರೆ.. ಹಲವರ ಜೊತೆಗೆ ಆತ್ಮೀಯ ಬಾಂಧವ್ಯವೂ ಇದೆ… ಬಹುತೇಕ ಮನೆ ಮಂದಿ ಅವರನ್ನ ಗೌರವಿಸುತ್ತಾರೆ ಕೂಡ.. ಇದೀಗ ಸ್ಪರ್ಧಿಗಳೇ ಗುರೂಜಿ ವಿರುದ್ಧ ತಿರುಗಿಬಿದ್ದಿದ್ಧಾರೆ..
ತಮ್ಮ ಆಟ ಆಡಲು ಇತರರ ಜೊತೆಗೆ ಚನಾಗಿರುವಂತಹ ಬುದ್ದಿ ಗುರೂಜಿಯದ್ದು ಅನ್ನೋದು ಮನೆಯ ಬಹುತೇಕ ಸ್ಪರ್ಧಿಗಳ ಅಭಿಪ್ರಾಯ..
ಇತ್ತೀಚೆಗೆ ಬಿಗ್ ಬಾಸ್ ರೂಲ್ಸ್ ಬ್ರೇಕ್ ಮಾಡಿದ್ದ ಗುರೂಜಿ ಅಡುಗೆ ಮನೆಯಲ್ಲಿದ್ರು. ಸ್ಟೋರ್ ರೂಮಿನಿಂದ ತಂದ ಪತ್ರವನ್ನು ಸಂಬರ್ಗಿ ಓದಿ, ಜೈಲು ಶಿಕ್ಷೆಯಲ್ಲಿ ಇರುವವರನ್ನು ಹೊರತು ಪಡಿಸಿ ಬೇರೆ ಯಾರೂ ತರಕಾರಿ ಹಚ್ಚುವಂತಿಲ್ಲ.
ಅನುಪಮಾ ಅವರ ಜೈಲು ಶಿಕ್ಷೆಯಲ್ಲಿರುವಾಗ ಆರ್ಯವರ್ಧನ್ ಅವರು ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪನ್ನು ಹಚ್ಚಿರುತ್ತಾರೆ.
ಹಾಗಾಗಿ ಮನೆಯಲ್ಲಿರುವ ಎಲ್ಲಾ ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪನ್ನು ತಂದು ಸ್ಟೋರ್ ರೂಮಿನಲ್ಲಿ ಇಡಬೇಕು ಎಂದು ಬಿಗ್ ಬಾಸ್ ತಿಳಿಸಿದ್ದಾರೆ ಎಂದಾಗ ಆರ್ಯವರ್ಧನ್ ಗುರೂಜಿ ಸಿಟ್ಟಾಗ್ತಾರೆ..
ಪ್ರಶಾಂತ್ ಸಂಬರ್ಗಿ ಅವರಿಗೆ ಎಲ್ಲರು ಸಹಾಯ ಮಾಡುತ್ತಾರೆ. ಈ ವೇಳೆ ಆಮ್ಲೇಟ್ ಮಾಡಿ ಮಾಡಿ ಅಂದ್ರಲ್ಲ ಆ ಟೆನ್ಶನ್ ನಲ್ಲಿ ಮಾಡಿಬಿಟ್ಟೆ ಎಂದು ಗುರೂಜಿ ತಮ್ಮ ತಪ್ಪಿನ ಬಗ್ಗೆ ವಿವರಣೆ ನೀಡಲು ಪ್ರಯತ್ನಿಸಿದ್ದಾರೆ.
ರಾಜಣ್ಣ 50 ಸಲ ತಲೆ ತಿನ್ನುತ್ತಾರೆ. ನೊಂದುಕೊಳ್ಳುತ್ತಾರೆ ಅಂತ ನಾನು ಮಾಡಿಕೊಟ್ಟೆ ಎಂದಿದ್ದಾರೆ. ಬಿಗ್ ಬಾಸ್ ಆದೇಶದ ಬಳಿಕ ಎಲ್ಲದನ್ನು ಎತ್ತಿಟ್ಟುಕೊಂಡು ಸಂಬರ್ಗಿ ಸ್ಟೋರ್ ರೂಮಿನಲ್ಲಿ ಇಟ್ಟಿದ್ದಾರೆ.
ನಂತರವೇ ಮಾತನಾಡಿರೋ ಗುರೂಜಿ ನಾವೂ ಕ್ಯಾಪ್ಟನ್ ಆಗಿದ್ರೆ ಅತ್ಯುತ್ತಮವನ್ನು ತೆಗೆದುಕೊಳ್ಳುತ್ತಾ ಇದ್ವಿ. ಎಷ್ಟು ವಾರ ಅಂತ ವೋಟ್ ಹಾಕುತ್ತಾರೆ ಹೇಳಿ. ನಾನೇನು ಆಡಿಲ್ವಾ, ಆಟ ಆಡಲ್ವಾ, ಮಾತಾಡಲ್ವಾ, ಯಾರಿಗಾದ್ರೂ ನೋಯಿಸಿದ್ದೀವಾ. ನಂಗೂ ನೋವಿದೆ. ಈ ಸಲ ಏನಾದ್ರೂ ನಾನು ಎಲಿಮಿನೇಟ್ ಆದ್ರೆ ಬಿಗ್ ಬಾಸ್ ಮನೆಯಲ್ಲಿ ಇವತ್ತು ನೋಡುವಿರಂತೆ ಎಂದು ಧಮ್ಕಿ ಹಾಕಿದ್ದಾರೆ..