Amitabh Bchachan : ಅಮಿತಾಬ್ ರಿಗೆ ‘ಭಾರತ ರತ್ನ’ ನೀಡಿ : ದೀದಿ ಮನವಿ
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್ ರಿಗೆ ‘ಭಾರತ ರತ್ನ’ ನೀಡಿ ಗೌರವಿಸಬೇಕೆಂದು ಮನವಿ ಮಾಡಿದ್ದಾರೆ..
ಬಿಗ್ ಬಿ ಕಲಾಸೇವೆಯನ್ನ ಗುರುತಿಸಿ, ಭಾರತ ರತ್ನ ಪ್ರಶಸ್ತಿ ಕೊಡಿ ಎಂದು ಕೊಲ್ಕತ್ತಾ ಚಿತ್ರೋತ್ಸವದಲ್ಲಿ ದೀದಿ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಬಚ್ಚನ್ ಅವರು ಕೂಡ ಮಾತನಾಡಿ, ಇಷ್ಟು ವರ್ಷಗಳಲ್ಲಿ ಚಿತ್ರರಂಗದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಪೌರಾಣಿಕ ಚಿತ್ರದಿಂದ ಹಿಡಿದು ಐತಿಹಾಸಿಕ ಚಿತ್ರದವರೆಗೂ ಚಿತ್ರರಂಗದಲ್ಲಿ ಹಲವು ಶೈಲಿಯ ಸಿನಿಮಾಗಳು ಬಂದು ಹೋಗಿದೆ. ಈ ಬದಲಾವಣೆ ಪ್ರೇಕ್ಷಕರನ್ನು ಸೆಳೆಯುವಂತೆ ಮಾಡಿದೆ. ಈ ಬದಲಾವಣೆ ಸಿನಿಪ್ರೇಕ್ಷಕರನ್ನ ರಾಜಕೀಯ ಮತ್ತು ಸಾಮಾಜಿಕ ಕಾಳಜಿಯನ್ನು ಪ್ರತಿಬಿಂಬಿಸುವಂತೆ ಮಾಡಿದೆ ಎಂದು ಮಾತನಾಡಿದ್ದಾರೆ.