BBK 9 : ನನ್ನ ಮನಸಾಕ್ಷಿ ಒಪ್ಪುತ್ತಿಲ್ಲ – ಗುರೂಜಿಗೆ ಕಳಪೆ ಕೊಟ್ಟು ಬೇಸರಗೊಂಡ ಅಮೂಲ್ಯ..!!
ಬಿಗ್ ಬಾಸ್ ಮನೆಯಲ್ಲಿ ಏನೇ ಟ್ವಿಸ್ಟ್ ಗಳು ಬರಬಹುದು , ಆಟದ ವಿಧಿ ವಿಧಾನಗಳು ಬದಲಾಗಬಹುದು.. ಆದ್ರೆ ಕೆಲವೊಂದು ಫಾರ್ಮೆಟ್ ಗಳನ್ನ ಬದಲಾಯಿಸೋದಕ್ಕೆ ಸಾಧ್ಯವೇ ಇಲ್ಲ… ನಾಮಿನೇಷನ್ ಇರಬಹುದು ಮತ್ತೊಂದು ಇರಬಹುದು..
ಪ್ರತಿ ವಾರ ಒಬ್ಬರನ್ನ ಕಳಪೆ ಎಂದು ಗುರುತಿಸಲೇಬೇಕು,. ಇದು ಬಿಗ್ ಬಾಸ್ ನಿಯಮ..
ಫಿನಾಲೆಗೆ ಇನ್ನೂ ಕೆಲವೇ ದಿನಗಳು ಬಾಕಿಯಿದೆ..
ಅಮೂಲ್ಯ ಗೌಡ ತನಗೆ ಕಳಪೆ ಕೊಡಲು ಮನಸಾಕ್ಷಿ ಒಪ್ಪುತ್ತಿಲ್ಲ ಎಂದು ಹೇಳಿ ಮನಸ್ಸಿಲ್ಲದ ಮನಸಲ್ಲೇ ಆರ್ಯವರ್ಧನ್ ಗುರೂಜಿಗೆ ಕಳಪೆ ಕೊಟ್ಟು ನೊಂದುಕೊಂಡಿದ್ದಾರೆ.
ಅಮೂಲ್ಯ ಮಾತಿಗೆ ಗುರೂಜಿ ಬೇಸರ ಹೊರಹಾಕಿದ್ದಾರೆ.
ಪ್ರತಿವಾರವೂ ಕೂಡ ಬಿಗ್ ಬಾಸ್ ಮನೆಯಲ್ಲಿ ಉತ್ತಮ ಮತ್ತು ಕಳಪೆಯನ್ನು ಸ್ಪರ್ಧಿಗಳಿಗೆ ಕೊಡಲಾಗುತ್ತದೆ.
ಈ ವಾರವೂ ಕೂಡ ಉತ್ತಮ ಮತ್ತು ಕಳಪೆ ಹೆಸರನ್ನ ಸೂಚಿಸಲಾಗಿದೆ.
ರೂಪೇಶ್ ಶೆಟ್ಟಿಗೆ ಉತ್ತಮ ಕೊಟ್ರೆ ಗುರೂಜಿಗೆ ಕಳಪೆ ನೀಡಲಾಗಿದೆ.
ಹೀಗಾಗಿ ಈ ವಾರ ಗುರೂಜಿ ಜೈಲಿಗೆ ತೆರಳಿದ್ದಾರೆ.
ಇದು ಆಟದ ಫಾರ್ಮ್ಯಾಟ್ ಕಳಪೆಗೆ ಹೆಸರು ಹೇಳಲೇಬೇಕು ಎಂದು ಎಲ್ಲರೂ ಹೇಳಿದ ಬಳಿಕ ನನ್ನ ಮನಸಾಕ್ಷಿ ಒಪ್ಪುತ್ತಿಲ್ಲ. ನನಗೆ ನಾನೇ ಕಳಪೆ… ಆದ್ರೂ ಹೆಸರು ಹೇಳಲೇಬೇಕು ಎಂಬ ಕಾರಣಕ್ಕೆ ಗುರೂಜಿ ಹೆಸರು ಹೇಳುತ್ತಿದ್ದೇನೆ. ಆದರೆ, ಅವರು ನಿಜವಾಗಿಯೂ ಕಳಪೆ ಅಲ್ಲ ಎಂದು ಅಮೂಲ್ಯ ಹೇಳಿದ್ದಾರೆ.
ಐ ಆಮ್ ಸಾರಿ ಬಿಗ್ ಬಾಸ್ ನಿಮಗೆ ನಾನು ಅಗೌರವ ತೋರುತ್ತಿಲ್ಲ. ಫಾರ್ಮ್ಯಾಟ್ಗೆ ಅಗೌರವ ತೋರುತ್ತಿಲ್ಲ. ನನಗೆ ಕಳಪೆ ಕಾಣಿಸುತ್ತಿಲ್ಲ. ಹೀಗಾಗಿ ಕಳಪೆ ಕೊಡೋದಕ್ಕೆ ನನ್ನ ಮನಸಾಕ್ಷಿ ಒಪ್ಪುತ್ತಿಲ್ಲ. ನನಗೆ ಶಿಕ್ಷೆ ಕೊಟ್ಟರೆ ನಾನೂ ತೆಗೆದುಕೊಳ್ಳೋಕೆ ರೆಡಿ ಇದ್ದೇನೆ.
ಇದು ರಿಯಾಲಿಟಿ, ಫಾರ್ಮ್ಯಾಟ್ ಪ್ರಕಾರ ಮಾಡಲೇಬೇಕು ಎಂದು ಇತರರು ಹೇಳಿದಾಗ, ನನಗೆ ಫೋರ್ಸ್ ಮಾಡ್ತಿದ್ದೀರಾ. ಉತ್ತಮಕ್ಕೆ ಕಾರಣ ಇದೆ. ಕಳಪೆಗೆ ಕಾರಣ ಸಿಗುತ್ತಿಲ್ಲ. ನನಗೆ ನಾನೇ ಕಳಪೆ ಹೇಳಲು ಮನಸಾಕ್ಷಿ ಒಪ್ಪಿಕೊಂಡಿಲ್ಲ.
ಆರ್ಯವರ್ಧನ್ ಗುರೂಜಿ ನಿಜವಾಗಿಯೂ ಕಳಪೆ ಅಲ್ಲ. ಒಂದು ಹೆಸರು ಹೇಳಬೇಕಾಗಿರೋದ್ರಿಂದ ಹೇಳ್ತಿದ್ದೇನೆ ಅಷ್ಟೇ ಎಂದರು..